1983ರ ಏಪ್ರಿಲ್ 7ರಂದು ದಾಖಲಿಸಿದ ಮಾಹಿತಿ ಹೀಗಿದೆ:

ಇದು ರಾಯಚೂರಿನ ಕವಿ - ವಿಚಾರವಾದಿ ಶಾಂತರಸರು ಬರೆದಿರುವ ಕವನ.
ಕಲಬುರ್ಗಿ ಆಕಾಶವಾಣಿ ಏರ್ಪಡಿಸಿದ್ದ `ಶ್ರಮಯೇವ ಜಯತೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕವನವನ್ನು ಅವರು ಓದಿದ್ದರು. ಈಗ ರಾಯಚೂರಿನ `ಗೀತೆ'ಯ ವಾರಸುದಾರರು

ಅನಗತ್ಯ ಗೊಂದಲವೆಬ್ಬಿಸುತ್ತಿದ್ದಾರೆ. ಗೀತೆಯನ್ನು ನಿಂದಿಸಲೆಂದೇ ಈ ಕವಿತೆ ಬರೆದಿದ್ದಾರೆ ಎಂಬ ಮಾತು ಸುಳ್ಳು. ದುಡಿಮೆಯ ಮಹತ್ವವನ್ನು - ತತ್ವವನ್ನು ಕವಿ ಇಲ್ಲಿ ಕಾರ್ಲ್ ಮಾರ್ಕ್ಸ್ ನ ಹಿ
ನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. "ಸಲಿಕೆ ಗುದ್ದಲಿ ಕಂಟೆ ರಂಟೆಗಳು" ಎಲ್ಲರ ಕೈಗಳಿಗೆ ಬರಬೇಕು ಎಂದು ಹೇಳಿರುವ ಮಾತು ಮಾರ್ಕ್ಸ್ ನಿಧನದ ಶತಮಾನೋತ್ಸವದ ಸಂದರ್ಭದಲ್ಲಿ ಮಹತ್ವದ್ದಾಗುತ್ತದೆ.
"ಫಲಾಫಲಗಳನ್ನು ನನಗೆ ಬಿಡು, ನಾನು ಕೊಟ್ಟರೆ ಕೊಟ್ಟೆ, ಇಲ್ಲದಿದ್ದರೆ ಇಲ್ಲ. ಅದು ನಿನ್ನ ಕರ್ಮ" ಎಂಬ ಶೋಷಕ ತತ್ವಗಳಿಂದಾಗಿಯೇ ನಮ್ಮ ಅವಸ್ಥೆ ದಿನದಿಂದ ದಿನಕ್ಕೆ ದಟ್ಟ ದಾರಿದ್ರ್ಯದತ್ತ ಸಾಗುತ್ತಿದೆಯಲ್ಲವೆ?
ಅಡಿ ಟಿಪ್ಪಣಿ: ಎಷ್ಟೋ ವರ್ಷಗಳ ನಂತರ ಇಂದಿನ ಮರು ಓದಿಗೆ ಸಿಕ್ಕ ಡೈರಿಯ ಪುಟಗಳು ನನಗೇ ಅಚ್ಚರಿ ಹುಟ್ಟಿಸುವಷ್ಟು ಸ್ವಾರಸ್ಯಕರವಾಗಿವೆ. ಜತೆಗೆ ನಾನು ಅಂದು ಕಮ್ಯುನಿಸ್ಟ್ ಪ್ರಭಾವಕ್ಕೆ ಒಳಗಾಗಿದ್ದು ನೆನಪಿಗೆ ಬರುತ್ತದೆ. ಕಾಲೇಜು ಕಲಿಕೆಯ ನಂತರ ಮಿತ್ರ ರಾಘವನ್ ಅಮೆರಿಕೆಗೆ ಉನ್ನತ ಶಿಕ್ಷಣಕ್ಕೆಂದು ತೆರಳಿದ. ಆತ ಮೊದಲ ಬಾರಿ ಇಂಡಿಯಾಕ್ಕೆ ಬಂದಾಗ ನನಗೆ ತಂದ ಉಡುಗೊರೆ - ಕೆಂಪು ಟೀಶರ್ಟ್. ನನ್ನ ಕಮ್ಯುನಿಸ್ಟ್ ಮಿತ್ರನಿಗೆ ಎಂಬ ಒಕ್ಕಣೆಯೊಂದಿಗೆ. ಹಳೆಯ ಬಟ್ಟೆಯ ಗಂಟಿನಲ್ಲಿ ಆ ಶರ್ಟ್ ಇನ್ನೂ ಮನೆಯಲ್ಲಿಯೇ ಇರಬಹುದು!)
1 comment:
keep going Sir ji!!
The memoir is highly enjoyable.
:-)
malathi S
Post a Comment