24 ಮಾರ್ಚ್ 1983, ಮಂಗಳವಾರ
Blind Schoolನಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿರುವುದು ಒಂದು ಹೊಸ ಬಗೆಯ ಅನುಭವ. ಕಣ್ಣಿರದ ಜನರ ಭಾವನೆಗಳನ್ನು ಕಣ್ಣಿದ್ದೂ ಕುರುಡರಾಗಿರುವ ನಮ್ಮ ಭಾವನೆಗಳಿಗೆ ಹೋಲಿಸಿದಾಗ ದೊರಕುವ ಅನುಭವದ ಪಾಠ ನೆನಪಿನಲ್ಲಿ ಉಳಿಯುವಂತಹುದು. ರಾಜೇಂದ್ರ Secretary, Sri Ramana Maharshi Academy for the Blind - ಬದಲಾದ ಮನುಷ್ಯನೊಬ್ಬನ ಕಥೆ. ಹೇಗಿದ್ದವ ಹೇಗಾದ? Sinner to a Saint?
ಮಲ್ಲಿಕಾರ್ಜುನ್ ಮಾದುತ್ತಿರುವ ಸೇವೆ ಕೂಡ ಮರೆಯಲಾಗದಂಥಹುದು.
ಇಂದು ಬರೆಯಲು ರಾಘವನ್ ಕಸಿನ್ ಡಾ||ರಾಣಿ ಬಂದಿದ್ದರು. (‘ವಿಜಿ’ ಅವರ ಅಕ್ಕ). ಅವರ ತಾಯಿ ಕೂಡಾ ಅಲ್ಲಿಗೆ ಬಂದಿದ್ದರು. ಅವರಿಬ್ಬರದೂ ಅದೆಷ್ಟು ಸ್ನೇಹಾ ಮನೋಭಾವ. ವಿಶಾಲ ಹೃದಯಿಗಳೂ ಕೂಡ.
ಆನಂದ್ ಕೂಡಾ ಬಂದಿದ್ದ. ನಿನ್ನೆ ರಾಘವನ್ ಮತ್ತು ಆನಂದ್. ಮೊನ್ನೆ ಮೋಹನ್ ಮತ್ತು ಆನಂದ್. ಮೊದಲ ದಿನ ನಾನು ಮತ್ತು ಮೋಹನ್.
ಸಂಸಾರದಲ್ಲಿ ಸ-ರಿ-ಗ-ಮ ನಾಟಕಕ್ಕೆ ಹೋಗಿದ್ದೆ.
ನೋಡಬಹುದಾದ ನಾಟಕ.
ನಿನ್ನೆ ರಾತ್ರಿಯ ಅಸಾಧ್ಯ ತಲೆ ಸಿಡಿತ - ನಿದ್ರೆಗಳನ್ನು ತಿಂದುಬಿಡುವಷ್ಟು ಕ್ರೂರವಾಗಿತ್ತು.
ನರ್ಸಿಂಗ್ ಹೋಂಗೆ (‘ಭಾವ’ ಅವರನ್ನು ನೋಡುವ ಸಲುವಾಗಿ) ಹೋಗಿದ್ದೆನೆಂದು ಸುಳ್ಳು ಹೇಳಬಾರದಿತ್ತು.
ಅಡಿ ಟಿಪ್ಪಣಿ: ರಮಣ ಮಹರ್ಷಿ ಅಂಧರ ಶಾಲೆಯ ಮಕ್ಕಳಿಗೆ scribe ಆಗಿ ಬಿ.ಎ. ಡಿಗ್ರಿ ಪರೀಕ್ಷೆಗೆ ಬರೆಯಲು ಹೋಗುತ್ತಿದ್ದೆವು. ನಾವಿನ್ನೂ ಪದವೀಧರರಾಗಿರದಿರುವುದು ಹಾಗೂ ಆರ್ಟ್ಸ್ ವಿಷಯಗಳನ್ನು ಕಲಿತಿರದಿರುವುದು ನಮಗೆ ಬರೆಯುವ ಅರ್ಹತೆಗಳನ್ನು ಕೊಟ್ಟಿತ್ತು.
ಮೋಹನ್ ಮರೆತು ಹೋಗಿದ್ದಾನೆ. ಆನಂದ್ ನಾನು ಈಗ ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿಯೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್.ಓ.ಡಿ. ಮಲ್ಲಿಕಾರ್ಜುನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಎಲ್ಲಿದ್ದಾರೋ ಗೊತ್ತಿಲ್ಲ.
ನನ್ನ ತಂದೆಯ ಭಾವ ಮೂತ್ರಕೋಶದ ತೊಂದರೆಗೆ ಜಯನಗರದ ದೀಪಕ್ ನರ್ಸಿಂಗ್ ಹೋಂ ಸೇರಿದ್ದರು. ನಿತ್ಯ ಸಂಜೆ ನೋಡಿಕೊಂಡು ಬರುವ ಜವಾಬ್ದಾರಿಯಿಂದ ಒಂದು ದಿನ ನುಣುಚಿಕೊಂಡಿದ್ದೆ. ಬಹುಶಃ ನಾಟಕ ನೋಡುವ ನೆಪವಿರಬೇಕು.
No comments:
Post a Comment